ಬದುಕಿನ ಒಂದೊಂದು ಮಗ್ಗಲುಗಳು
ತಮ್ಮ ತಾವು ಬದಲಾಯಿಸಿಕೊಳ್ಳುತ್ತಿದ್ದರೆ..
ಒಂದೊಂದು ಮೆಟ್ಟಿಲುಗಳು
ತಮ್ಮ ತಾವು ಹತ್ತಿಸಿಕೊಳ್ಳುತ್ತಿದ್ದರೆ..
ಒಂದೊಂದು ಹಂತಗಳು
ತಮ್ಮ ತಾವು ದಾಟಿಸಿಕೊಳ್ಳುತ್ತಿದ್ದರೆ..
ಬದಲಾಯಿಸುವಾಗ,ಹತ್ತುವಾಗ,ದಾಟುವಾಗ
ನೀನೊಬ್ಬಳಿರಲೇಬೇಕಿತ್ತು ಅನ್ನಿಸುತ್ತದೆ..
ಪ್ರತೀವಸ್ತುವೂ ಫಳಫಳ.
ಜಗವೆಲ್ಲ ಝಗಝಗ..
ಆದರೆ
ತಿರುಗಿಕೂತಿವೆ ಕಣ್ಣುಗಳು
ನಿನ್ನೆಡೆಗೆ.
ರೆಪ್ಪೆಗೀಗ ಉಪ್ಪುನೀರಿನ ಪಥ್ಯ.
ನಿರ್ಧಾರಗಳು ನಮ್ಮದಿರಬೇಕಿತ್ತು
ಅನ್ನಿಸುವುದು
ಅವುಗಳ ನಾಳೆಗಳು ಕ್ರೂರವಾಗಿದ್ದಾಗ..
ಈಗ ?
'ಭೂತ'ವೊಂದು ಅಸಂಖ್ಯಾತ ಬಿಳಲುಗಳ
ಶಾಪಗ್ರಸ್ಥ ಆಲದಮರ..
ನನ್ನೊಳಗಿನ ಸೇತುವೆಯ ಕೆಳಗೆ
ಹೊಸನೀರು ಹರಿಯುವುದು ಯಾವಾಗ ಹುಡುಗೀ ?
ತಪ್ಪು ನಂದೇ ಬಿಡು..
ಕಟ್ಟಿದ್ದೇನೆ ಸೇತುವೆಯನ್ನ
ಕೆರೆಗೆ.
ತುಂಬಿಸಿಕೊಳ್ಳಬಾರದಿತ್ತು ನಿನ್ನ.
ಈಗಿನ ಈ ರೋಗದಂಥ
ಖಾಲಿತನಕ್ಕೆ ಪರಿಚಯವಾಗುತ್ತಿರಲಿಲ್ಲ ನಾನು.
ಕಿರುಚಬೇಕನಿಸುತ್ತದೆ..
ಹಾಳಾದ್ದು ಗಂಟಲೂ ಖಾಲಿ..
ಲಾಂದ್ರದಲ್ಲಿ ಸೀಮೆಣ್ಣೆ ಮುಗಿದುಹೋಗಿದೆ..
ಕೈಯಲ್ಲಿ ನೆಂದ ಬೆಂಕಿಪೊಟ್ಟಣ..
ಮಿಂಚುಹುಳಗಳು ವಲಸೆಹೋಗಿವೆ..
ಸತ್ತ ನಕ್ಷತ್ರ ಅಳಿದುಳಿದ ಬೆಳಕನ್ನೂ ಹೀರಿ ಕೂತಿದೆ..
ಥೂ..
ನೀನಿರಬೇಕಿತ್ತು ಕೂಸೇ..
ನೀನಿರಲೇಬೇಕಿತ್ತು..
:(
ತಮ್ಮ ತಾವು ಬದಲಾಯಿಸಿಕೊಳ್ಳುತ್ತಿದ್ದರೆ..
ಒಂದೊಂದು ಮೆಟ್ಟಿಲುಗಳು
ತಮ್ಮ ತಾವು ಹತ್ತಿಸಿಕೊಳ್ಳುತ್ತಿದ್ದರೆ..
ಒಂದೊಂದು ಹಂತಗಳು
ತಮ್ಮ ತಾವು ದಾಟಿಸಿಕೊಳ್ಳುತ್ತಿದ್ದರೆ..
ಬದಲಾಯಿಸುವಾಗ,ಹತ್ತುವಾಗ,ದಾಟುವಾಗ
ನೀನೊಬ್ಬಳಿರಲೇಬೇಕಿತ್ತು ಅನ್ನಿಸುತ್ತದೆ..
ಪ್ರತೀವಸ್ತುವೂ ಫಳಫಳ.
ಜಗವೆಲ್ಲ ಝಗಝಗ..
ಆದರೆ
ತಿರುಗಿಕೂತಿವೆ ಕಣ್ಣುಗಳು
ನಿನ್ನೆಡೆಗೆ.
ರೆಪ್ಪೆಗೀಗ ಉಪ್ಪುನೀರಿನ ಪಥ್ಯ.
ನಿರ್ಧಾರಗಳು ನಮ್ಮದಿರಬೇಕಿತ್ತು
ಅನ್ನಿಸುವುದು
ಅವುಗಳ ನಾಳೆಗಳು ಕ್ರೂರವಾಗಿದ್ದಾಗ..
ಈಗ ?
'ಭೂತ'ವೊಂದು ಅಸಂಖ್ಯಾತ ಬಿಳಲುಗಳ
ಶಾಪಗ್ರಸ್ಥ ಆಲದಮರ..
ನನ್ನೊಳಗಿನ ಸೇತುವೆಯ ಕೆಳಗೆ
ಹೊಸನೀರು ಹರಿಯುವುದು ಯಾವಾಗ ಹುಡುಗೀ ?
ತಪ್ಪು ನಂದೇ ಬಿಡು..
ಕಟ್ಟಿದ್ದೇನೆ ಸೇತುವೆಯನ್ನ
ಕೆರೆಗೆ.
ತುಂಬಿಸಿಕೊಳ್ಳಬಾರದಿತ್ತು ನಿನ್ನ.
ಈಗಿನ ಈ ರೋಗದಂಥ
ಖಾಲಿತನಕ್ಕೆ ಪರಿಚಯವಾಗುತ್ತಿರಲಿಲ್ಲ ನಾನು.
ಕಿರುಚಬೇಕನಿಸುತ್ತದೆ..
ಹಾಳಾದ್ದು ಗಂಟಲೂ ಖಾಲಿ..
ಲಾಂದ್ರದಲ್ಲಿ ಸೀಮೆಣ್ಣೆ ಮುಗಿದುಹೋಗಿದೆ..
ಕೈಯಲ್ಲಿ ನೆಂದ ಬೆಂಕಿಪೊಟ್ಟಣ..
ಮಿಂಚುಹುಳಗಳು ವಲಸೆಹೋಗಿವೆ..
ಸತ್ತ ನಕ್ಷತ್ರ ಅಳಿದುಳಿದ ಬೆಳಕನ್ನೂ ಹೀರಿ ಕೂತಿದೆ..
ಥೂ..
ನೀನಿರಬೇಕಿತ್ತು ಕೂಸೇ..
ನೀನಿರಲೇಬೇಕಿತ್ತು..
:(
No comments:
Post a Comment