About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, March 17, 2012

ಇನ್ನಷ್ಟು ಹಾಯ್ಕುಗಳು:

* ಹುಟ್ಟು ಕುರುಡನ ನಗ್ನ ಸತ್ಯ:
  "ಅವನು ತನ್ನ ಒಳಗಣ್ಣಿನಿಂದ 'ಭಗವಂತ'ನನ್ನು ನೋಡಬಲ್ಲ..
  'ಬೆತ್ತಲೆ ಚಿತ್ರ' ನೋಡಲಾರ..!!"

* ಮಗು ಹೊಡೆದ ಪಟಾಕಿಗೆ ಬೆಚ್ಚಿದ ಅಂಗಡಿಯವನು
  "ಹಬ್ಬ ಆದ್ಮೇಲೇನೋ ನಿಂದು ಬೋಳಿಮಗನೇ" ಅಂದಾಗ
   ಮಗು ಸ್ಪಷ್ಟವಾಗಿ ಕಲಿತಿದ್ದು ಆತ ಹೇಳಿದ ಕೊನೇ ಪದ ಮಾತ್ರ,
   ಮತ್ತದೊಂದು ದುರಂತ.

* ಇಡೀ ದಿನ ಬಾಯ್ತುಂಬ ಹೊಗಳಿಸಿಕೊಳ್ಳಬೇಕಾದವನು
   ಅಸ್ಪಷ್ಟ ಮುಂಜಾವಿನಲ್ಲೇ ಹಾಳಾಗಿ ಹೋದ.
   ಉಳಿದಿದ್ದು ದಿನಪೂರ್ತಿಯ ಮೌನ.

* ಕರಡಿ ಕಾಡಿಗೆ ಹೋಯಿತು.."
   ಕರಡಿಯ ಬಣ್ಣ ಕಪ್ಪು..
   ಆದರೆ ನಂತರದ ಪದಕ್ಕೂ ಅದೇ ಅರ್ಥ ಸಿಕ್ಕಿದ್ದು ತಮಾಷೆ..!
   (ಕಾಡಿಗೆ - ಕಣ್ಣು ಕಪ್ಪು)

* "ರೇತಸ್ಸು" ಪದದ ಅರ್ಥ ಗೊತ್ತಿಲ್ಲದವನು..
  "ತೇಜಸ್ಸು" ಪದದ ಲೆವೆಲ್ಲಿಗೆ ಅದನ್ನು
   ಕೇಳಿ ಅನುಭವಿಸೋದು ದುರಂತ..!

* ಹೆಣ್ಣು,ಉಪ್ಪಿನಕಾಯಿ ಎರಡೂ ಒಂದೇ..
   ಜೊಲ್ಲಿನ ವಿಷಯಕ್ಕೆ ಬಂದಾಗ..!

* ಕೆಟ್ಟದ್ದನ್ನು ಮಾಡಬೇಡ ಎಂದವನು ಗಾಂಧಿ..
   ಅಡಿಕೆ ಬೆಳೆಗಾರರಲ್ಲ..
   ಅವರು ಗುಟ್ಕಾ ವಿರೋಧಿಗಳಲ್ಲ...!!

1 comment:

  1. ಹಳೆ ಹಾಯ್ಕುಗಳು.. ಚಂದ ಹಾಯ್ಕುಗಳು :))

    ReplyDelete